ಕಾರವಾರ

ಕಾರವಾರ: ಭಾರತೀಯ ನೌಕಾಪಡೆಯ ಯೋಧ ವಿನೋದ ತುಕಾರಾಮ ಖಾರ್ವಿ ಅಕಾಲಿಕ ನಿಧನ; ಭಾನುವಾರ ಅಂತ್ಯಕ್ರಿಯೆ

ಕಾರವಾರ: ಭಾರತೀಯ ನೌಕಾಪಡೆಯ ಯೋಧ ವಿನೋದ ತುಕಾರಾಮ ಖಾರ್ವಿ ವಿಶಾಖಪಟ್ಟಣಂನಲ್ಲಿ ಕರ್ತವ್ಯದಲ್ಲಿದ್ದಾಗ ನಿಧನ. ಭಾನುವಾರ ಬೆಳಿಗ್ಗೆ 9:30ಕ್ಕೆ ಕೋಡಿಬಾಗದಲ್ಲಿ ದರ್ಶನ, ರುದ್ರಭೂಮಿಯಲ್ಲಿ ಸೈನಿಕ ಗೌರವದೊಂದಿಗೆ ಅಂತ್ಯಕ್ರಿಯೆ.

ಕಾರವಾರ: ಭಾರತೀಯ ನೌಕಾಪಡೆಯ ಯೋಧ ವಿನೋದ ತುಕಾರಾಮ ಖಾರ್ವಿ ಅಕಾಲಿಕ ನಿಧನ; ಭಾನುವಾರ ಅಂತ್ಯಕ್ರಿಯೆ

ಕಾರವಾರ: ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರವಾರ ಮೂಲದ ಯೋಧ ವಿನೋದ ತುಕಾರಾಮ ಖಾರ್ವಿ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ.

ವಿಶಾಖಪಟ್ಟಣಂನಲ್ಲಿ ಪಿಟಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಶುಕ್ರವಾರ (ಆಗಸ್ಟ್ 15) ಕರ್ತವ್ಯದಲ್ಲಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಭಾನುವಾರ (ಆಗಸ್ಟ್ 17) ಬೆಳಿಗ್ಗೆ 9:30 ಕ್ಕೆ ಕಾರವಾರ ತಾಲೂಕಿನ ಕೋಡಿಬಾಗದ ಸ್ವಾಮಿ ವಿವೇಕಾನಂದ ಹೈಸ್ಕೂಲ್ ಬಳಿಯ ಪಂಚರಿಶಿವಾಡದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ, ಕಾರವಾರದ ರುದ್ರಭೂಮಿಯಲ್ಲಿ ಭಾರತೀಯ ನೌಕಾಪಡೆಯ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಲೇಖನವನ್ನು ಹಂಚಿಕೊಳ್ಳಿ