ಕೋಟ: ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಸಾಕು ಪ್ರಾಣಿಗಳಿಗೆ ಹಿಂಸೆ; ಎಫ್ಐಆರ್
ಸಾಲಿಗ್ರಾಮದ ಸುಧೀಂದ್ರ ಐತಾಳ್ ಅವರ ಪ್ರಾಣಿ ರಕ್ಷಣಾ ಕೇಂದ್ರದ ಮೇಲೆ ಪೇಟಾ ಸಂಸ್ಥೆ ನಡೆಸಿದ 7ನೇ ದಾಳಿಯಲ್ಲಿ ಕರುವಿನ ಶವ ಹಾಗೂ ಕಾಯಿಲೆ ಬಿದ್ದಿದ್ದ 17 ಪ್ರಾಣಿಗಳನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ. ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಕೋಟ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಾಗಿದೆ.

