ಕುಂದಾಪುರ: ಅಂದರ್–ಬಾಹರ್ ಜುಗಾರಿ ಆಟಕ್ಕೆ ದಾಳಿ: ನಾಲ್ವರು ಬಂಧನ
ಸಿದ್ದಾಪುರದ ಮೇಜ್ಜೆಡ್ಡಿನಲ್ಲಿ ಹಣ ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಮನೆಯೊಂದರ ಆವರಣದಲ್ಲಿ ನಡೆಯುತ್ತಿದ್ದ ಈ ಅಡ್ಡೆಯ ಮೇಲೆ ಸಿಪಿಐ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 6,700 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

