ಮಳೆಗಾಲದ ವಿದ್ಯುತ್ ಸಮಸ್ಯೆ ನಿವಾರಣೆಗೆ ಮೆಸ್ಕಾಂ ಸನ್ನದ್ಧ: 4 ಜಿಲ್ಲೆಗಳಲ್ಲಿ 489 ಸದಸ್ಯರ ಕಾರ್ಯಪಡೆ ರಚನೆ
ಮಳೆಗಾಲದ ವಿದ್ಯುತ್ ಅಡಚಣೆ ತಡೆಯಲು ಮೆಸ್ಕಾಂ 489 ಸದಸ್ಯರ ಬೃಹತ್ ಕಾರ್ಯಪಡೆಯನ್ನು ರಚಿಸಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ತುರ್ತು ನಿರ್ವಹಣೆಗೆ ವಾಹನ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ದೂರು ನೀಡಲು 1912 ಸಹಾಯವಾಣಿ ಬಳಸಲು ಸೂಚಿಸಲಾಗಿದೆ.

