ಉಡುಪಿ: ನಾಪತ್ತೆಯಾಗಿದ್ದ ಅಂಬಾಗಿಲು ನಿವಾಸಿಯ ಶವ ಇಂದ್ರಾಣಿ ನದಿಯಲ್ಲಿ ಪತ್ತೆ
ಉಡುಪಿಯ ಅಂಬಾಗಿಲಿನಿಂದ ನಾಪತ್ತೆಯಾಗಿದ್ದ 54 ವರ್ಷದ ಸುರೇಶ್ ಪೂಜಾರಿ ಅವರ ಶವ ಕೊಡವೂರಿನ ಇಂದ್ರಾಣಿ ನದಿಯಲ್ಲಿ ಪತ್ತೆಯಾಗಿದೆ. ಸಮಾಜ ಸೇವಕ ನಿತ್ಯಾನಂದ ಒಳಕಾಡು ಮತ್ತು ತಂಡದ ನೆರವಿನೊಂದಿಗೆ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

