ದಕ್ಷಿಣದ ರಾಜ್ಯಗಳನ್ನು ಉತ್ತರದ ದಾಸ್ಯಕ್ಕೆ ತಳ್ಳುವ ಮಸೂದೆ ತಡೆಯಿರಿ: ಮಾಜಿ ಪ್ರಧಾನಿ ದೇವೇಗೌಡರಿಗೆ ಲೇಖಕರಿಂದ ಬಹಿರಂಗ ಪತ್ರ
ಕ್ಷೇತ್ರ ಪುನರ್ವಿಂಗಡಣೆಯು ದಕ್ಷಿಣ ಭಾರತದ ಅಸ್ತಿತ್ವಕ್ಕೆ ಮಾರಕ ಎಂದು ಆತಂಕ ವ್ಯಕ್ತಪಡಿಸಿ ಲೇಖಕರಾದ ನಾಗೇಗೌಡ ಕೀಲಾರ ಮತ್ತು ರಾಜೇಂದ್ರ ಪ್ರಸಾದ್ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಉತ್ತರದ ರಾಜಕೀಯ ದೌರ್ಜನ್ಯದ ವಿರುದ್ಧ ದಕ್ಷಿಣದ ನಾಯಕರನ್ನು ಒಗ್ಗೂಡಿಸಿ ಹೋರಾಟದ ನೇತೃತ್ವ ವಹಿಸುವಂತೆ ಅವರು ಈ ಮೂಲಕ ಆಗ್ರಹಿಸಿದ್ದಾರೆ.

