ಉಡುಪಿ: ಎ.26ಕ್ಕೆ ಭವ್ಯ “ದೇಶಾಭಿಮಾನಿ ಸಮಾವೇಶ”; ನಟ ದುನಿಯಾ ವಿಜಯ್ ಉದ್ಘಾಟನೆ, ಸಮಾಜ ಸೇವಕ ಡಾ. ಎಚ್.ಎಸ್. ಶೆಟ್ಟಿಗೆ ‘ಭೀಮ ಸಾರಥಿ’ ಪ್ರಶಸ್ತಿ
ಡಾ. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಅಂಗವಾಗಿ ಎ.26ರಂದು ಉಡುಪಿಯಲ್ಲಿ ‘ದೇಶಾಭಿಮಾನಿ ಸಮಾವೇಶ’ ನಡೆಯಲಿದೆ. ನಟ ದುನಿಯಾ ವಿಜಯ್ ಸಮಾವೇಶ ಉದ್ಘಾಟಿಸಲಿದ್ದು, ಇದಕ್ಕೂ ಮುನ್ನ ಬೃಹತ್ ಸಾಂಸ್ಕೃತಿಕ ಜಾಥಾ ನಡೆಯಲಿದೆ. ಡಾ. ಎಚ್.ಎಸ್. ಶೆಟ್ಟಿಗೆ ‘ಭೀಮ ಸಾರಥಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

