ಉಡುಪಿ

ಉಡುಪಿಯಲ್ಲಿ 20×14 ಅಡಿ ತ್ರಿವರ್ಣ ಧ್ವಜದೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ಮಾರುತಿ ವೀಥಿಕಾದಲ್ಲಿ 20×14 ಅಡಿ ತ್ರಿವರ್ಣ ಧ್ವಜ ಪ್ರದರ್ಶನದೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆ. ನಿತ್ಯಾನಂದ ಒಳಕಾಡು ಆಯೋಜನೆ, ಯೋಗೇಶ್ ಪಿ.ಆರ್. ಚಾಲನೆ, ಶ್ರೀಧರ ಭಟ್ ಉಚಿತ ಉಪಾಹಾರ.

ಉಡುಪಿಯಲ್ಲಿ 20×14 ಅಡಿ ತ್ರಿವರ್ಣ ಧ್ವಜದೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆ

ಉಡುಪಿ, ಆಗಸ್ಟ್ 15, 2025: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ಆಯೋಜನೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಗರದ ಮಾರುತಿ ವೀಥಿಕಾದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ 20×14 ಅಡಿ ಸುತ್ತಳತೆಯ ಬೃಹತ್ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಯಿತು.

ಧ್ವಜ ಪ್ರದರ್ಶನಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್. ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೋಟಕ್ ಮಹೀಂದ್ರಾ ಬ್ಯಾಂಕಿನ ವ್ಯವಸ್ಥಾಪಕ ವಿವೇಕ್ ಹೆಗ್ಡೆ, ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವನಿತಾ, ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪಾಕತಜ್ಞ ಶ್ರೀಧರ ಭಟ್ ಅವರು ಉಚಿತವಾಗಿ ಉಪಾಹಾರವನ್ನು ಒದಗಿಸಿದರು.

ಈ ಲೇಖನವನ್ನು ಹಂಚಿಕೊಳ್ಳಿ