ಉಡುಪಿ: ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಪೀಠಾರೋಹಣ; ಸೌಹಾರ್ದತೆಯ ಬದುಕಿಗೆ ಕರೆ

ಉಡುಪಿ ಧರ್ಮಪ್ರಾಂತ್ಯದ 2ನೇ ಬಿಷಪ್ ಆಗಿ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಪೀಠಾರೋಹಣ ಮಾಡಿದರು. “ನಾನು ತುಳು ತಾಯಿಯ ಮಗ” ಎಂದು ತುಳುವಿನಲ್ಲಿ ಸಂದೇಶ ನೀಡಿದ ಅವರು, ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮನುಷ್ಯತ್ವದ ಬದುಕಿಗೆ ಒತ್ತು ನೀಡುವಂತೆ ಮನವಿ ಮಾಡಿದರು.