ನೋಯ್ಡಾ ಕಾರ್ಮಿಕರ ಅಶಾಂತಿ: ನ್ಯಾಯಯುತ ವೇತನ ಮತ್ತು ಘನತೆಯ ಬದುಕಿಗಾಗಿ ಸರ್ಕಾರ ಮಧ್ಯಪ್ರವೇಶಿಸಲಿ – ಜಮಾಅತೆ ಇಸ್ಲಾಮಿ ಹಿಂದ್ (JIH) ಆಗ್ರಹ
ನೋಯ್ಡಾದಲ್ಲಿ ಕಾರ್ಮಿಕರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಜಿಐಹೆಚ್ ಉಪಾಧ್ಯಕ್ಷ ಪ್ರೊ. ಸಲೀಂ ಇಂಜಿನಿಯರ್ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಪ ವೇತನ ಮತ್ತು ಕೆಲಸದ ಕಿರುಕುಳವನ್ನು ನಿಲ್ಲಿಸಿ, ಕಾರ್ಮಿಕರಿಗೆ ಘನತೆಯ ಬದುಕು ಮತ್ತು ನ್ಯಾಯಯುತ ವೇತನ ನೀಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

