ಕೊಲ್ಲೂರು ದೇವಸ್ಥಾನದ ಕಳ್ಳತನ ಪ್ರಕರಣ: ರಿಕ್ಷಾ ಚಾಲಕರಿಗೆ ಸನ್ಮಾನ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದಿದ್ದ 80 ಸಾವಿರ ರೂ. ಕಳ್ಳತನ ಪ್ರಕರಣದ ಮಹಿಳಾ ಆರೋಪಿಗಳ ಪತ್ತೆಗೆ ನಿಖರ ಮಾಹಿತಿ ನೀಡಿ ಸಹಕರಿಸಿದ ರಿಕ್ಷಾ ಚಾಲಕರಾದ ನವೀನ್ ಪೂಜಾರಿ ಮತ್ತು ಗಣೇಶ್ ಆಚಾರಿ ಅವರಿಗೆ ಕುಂದಾಪುರ ಡಿವೈಎಸ್ಪಿ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿದರು.

