ಲೋನಾವಾಲಾ: ಲೋಹಗಢ ಕೋಟೆಯಲ್ಲಿ ಯುವಕನ ಸಾವು ಆಕಸ್ಮಿಕವಲ್ಲ, ಕೊಲೆ; ನಿಶ್ಚಿತ ವಧು ಹಾಗೂ ಆಕೆಯ ಪ್ರಿಯಕರನ ಬಂಧನ
ಲೋನಾವಾಲಾದ ಲೋಹಗಢ ಕೋಟೆಯಲ್ಲಿ ಕಣಿವೆಗೆ ಬಿದ್ದು ಮೃತಪಟ್ಟಿದ್ದ ಉದ್ಯಮಿ ಕೇತನ್ ಅಗರ್ವಾಲ್ ಸಾವು ಆಕಸ್ಮಿಕವಲ್ಲ, ಅದೊಂದು ಯೋಜಿತ ಕೊಲೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಮದುವೆಗೆ ಅಡ್ಡಿಯಾಗಿದ್ದಕ್ಕೆ ನಿಶ್ಚಿತ ವಧು ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೇತನ್ನನ್ನು ಕಣಿವೆಗೆ ತಳ್ಳಿ ಕೊಂದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
