ಪಾಂಡವಪುರ: ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ರದ್ದು; ತಾಲ್ಲೂಕು ಆಡಳಿತದ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ
ಪಾಂಡವಪುರದಲ್ಲಿ ಅಂಬೇಡ್ಕರ್ ಫೋಟೋ ಪಕ್ಕದಲ್ಲಿ ಬಾಬು ಜಗಜೀವನ್ ರಾಮ್ ಫೋಟೋ ಇರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆದಿದ್ದು, ಅಂತಿಮವಾಗಿ ತಾಲ್ಲೂಕು ಮಟ್ಟದ ಜಯಂತಿ ಕಾರ್ಯಕ್ರಮ ರದ್ದಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

