ಶಿರಸಿ, ಸೆಪ್ಟೆಂಬರ್ 03, 2025: ಶಿರಸಿಯ ಶಿವಾಜಿ ಚೌಕದ ಗಜಾನನೋತ್ಸವ ಮಂಡಳಿಯವರು ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯನ್ನು ಡಿಜೆ ಇಲ್ಲದೆ ಸಾಂಪ್ರದಾಯಿಕ ರೀತಿಯಲ್ಲಿ, ಶಾಂತಿಯುತವಾಗಿ ಮತ್ತು ಶಿಸ್ತುಬದ್ಧವಾಗಿ ಆಚರಿಸಿದ್ದಕ್ಕಾಗಿ ಶಿರಸಿ ನಗರ ಪೊಲೀಸ್ ಠಾಣೆಯಿಂದ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಮಹಾದೇವ ಪಟಗಾರ, ಪ್ರಧಾನ ಕಾರ್ಯದರ್ಶಿ ಗಜಾನನ ಸಕಲಾತಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪರಮಾನಂದ ಹೆಗಡೆ, ಮೋಹನ ಬೈಂದೂರ, ಶಂಭುಲಿಂಗ ಎಳಗೇರಿ, ಪ್ರಭಾಕರ ಜೋಗಳೇಕರ, ಅರುಣ ನಾಯ್ಕ, ಗಣೇಶ ಜೈವಂತ, ವಿಠಲ ಪಂಡಿತ, ಘನಶ್ಯಾಮ ಪ್ರಭು, ಅನಂತ ಅಣ್ವೇಕರ ಮತ್ತಿತರರು ಉಪಸ್ಥಿತರಿದ್ದರು. ಶಿರಸಿ ನಗರ ಠಾಣೆಯ ಪಿಎಸ್ಐಗಳಾದ ನಾಗಪ್ಪ ಬಿ., ನಾರಾಯಣ ರಾಥೋಡ್ ಹಾಗೂ ಠಾಣೆಯ ಸಿಬ್ಬಂದಿಗಳು ಸಹ ಹಾಜರಿದ್ದರು.