ವಿಟ್ಲ, ಸೆಪ್ಟೆಂಬರ್ 18, 2025: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವಂತಹ ಕಮೆಂಟ್ ಹಾಕಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಬಂಟ್ವಾಳ ತಾಲೂಕು ನಿವಾಸಿ ಅಬ್ದುಲ್ ರಹಿಮಾನ್ ಅವರು ನೀಡಿದ ದೂರಿನ ಆಧಾರದ ಮೇಲೆ ‘ಸನಾತನಿ ಸಿಂಹ’ ಎಂಬ ಫೇಸ್ಬುಕ್ ಪೇಜ್ ವಿರುದ್ಧ ಅಪರಾಧ ಕ್ರಮಾಂಕ 131/2025ರಡಿಯಲ್ಲಿ ಕಲಂ 353(2) BNS 2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 18ರಂದು ಮೊಬೈಲ್ನಲ್ಲಿ ಫೇಸ್ಬುಕ್ ಅಪ್ಲಿಕೇಶನ್ ವೀಕ್ಷಿಸುತ್ತಿದ್ದಾಗ, ‘ವರ್ತಾ ಭಾರತಿ’ ಪೇಜ್ನಲ್ಲಿ ಹಾಕಿದ್ದ ಸುದ್ದಿಗೆ ಸಂಬಂಧಿಸಿದ ಪೋಸ್ಟ್ಗೆ ‘ಸನಾತನಿ ಸಿಂಹ’ ಪೇಜ್ನಿಂದ ಸಮುದಾಯಗಳ ನಡುವೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯ ಕಮೆಂಟ್ ಹಾಕಿರುವುದು ಕಂಡುಬಂದಿದೆ ಎಂದು ಅಬ್ದುಲ್ ರಹಿಮಾನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.